ಸೇರಲೇಬೇಕು ಸಾವೆಂಬ ಸಾಗರದಿ
ಯೇರಲೇಬೇಕು ಕಷ್ಟಗಳೆಂಬ ಪರ್ವತದ ತುದಿ
ಇದುವೆ ಜೀವನದ ವಿಧಿ
ಒಮ್ಮೆ ಸಂತೋಷದ ಜಲಪಾತ
ಮತ್ತದೇ ಕೆಳಗೆ ನೋವಿನ ಪ್ರಪಾತ
ಬಂಧನಗಳೆಂಬ ಹಳ್ಳಗಳೊಂದಿಗೆ ಸೇರುತ
ಹರಿಯಲೇಬೇಕು ಸಾವಿನ ಸಾಗರದತ್ತ
ನೆನಪು ಗಳೆಂಬ ಸುಳಿಗಳ ಸುತ್ತ
ತಿರುಗಲೇಬೇಕು ಮತ್ತೆ ಮರೆಯುತ್ತ
ಸಾಗಲೇ ಬೇಕು ಬಿಡದೆ ಗಮ್ಮತ್ತ
ಚಲಿಸಲೇಬೇಕು ಮುಂದಿನ ಗುರಿಯತ್ತ
ಇದುವೆ ಜೀವನ ತತ್ವ
.........................ಜಪೂ
No comments:
Post a Comment