ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಇರುವ ಬಿಳಿ ಗಂಢಬೇರುಂಡ ಶಾಂತಿ,ಸಮಾನತೆ ಹಾಗೂ ಧರ್ಮದ ಸಿದ್ಧಾಂತಗಳನ್ನು ಸಾರುತ್ತದೆ.
ಆನೆಯ ಸೊಂಡಿಲು ಸಿಂಹದ ಶರೀರ ಹೊಂದಿರುವ ಶರಭದ ಚಿತ್ರ ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಹಳದಿ ಬಣ್ಣ ಪ್ರಾಮಾಣಿಕತೆ ಹಾಗೂ ರಾಜ ನಿಷ್ಠೆಯನ್ನು ಪ್ರತಿನಿಧಿಸುತ್ತದೆ,ಕೆಂಪು ಧೈರ್ಯ ಮತ್ತು ಆಳ್ವಿಕೆಯ ಸಂಕೇತವಾಗಿದೆ. ನೀಲಿ ವಿಶ್ವಭ್ರಾತೃತ್ವವನ್ನು ಸೂಚಿಸಿದರೆ,ಎರಡು ಹಸಿರು ಬಳ್ಳಿಗಳು ಸಮೃದ್ಧತೆಯ ಸಾರವಾಗಿದೆ.
ಮೇಲ್ಭಾಗದಲ್ಲಿ ನಾಲ್ಕು ತಲೆಯ ಸಿಂಹವನ್ನೋಳಗೊಂಡ ರಾಷ್ಟ್ರ ಲಾಂಛನವಿದ್ದರೆ ,ಕೆಳ ಭಾಗದಲ್ಲಿ ಸತ್ಯಮೇವ ಜಯತೇ ಎಂಬ ಘೋಷವಾಕ್ಯವಿದೆ. ಜೈ ಕರ್ನಾಟಕ ................
Friday, March 18, 2011
Subscribe to:
Posts (Atom)