Saturday, March 1, 2008

ಸಾರ್ಥಕ ಜೀವನ

ಆಗಿದೆ ನಮ್ಮ ಜೀವನ

ದ್ವೇಷ ,ಅಸೂಯೆಗಳ ಕಾನನ

ಆಗುವುದು ಸುಂದರ ವನ

ಬೆಳೆದಾಗ ಸ್ನೇಹ , ಪ್ರೀತಿಗಳ ಬಂಧನ


ಮೇಲು -ಕೀಳು ,ಅಸೂಯೇಯನ್ನ

ತೊಲಗಿಸೋಣ ನಮ್ಮಿಂದ ಅಣ್ಣ

ನಮ್ಮಲ್ಲಿ ಬೆಳೆಸೋಣ ವಿಶ್ವ ಮಾನವನನ್ನ

ಎಂದರು ಕುವೆಂಪು , ಬಸವಣ್ಣ


ಭಾವ-ಭಾವಗಳಲ್ಲಿ ಬಂಧನ ಬೆಳೆಸೋಣ

ಪ್ರೀತಿ ಭಾವನೆಯನ್ನ ಉಳಿಸೋಣ

ನಮ್ಮ ಜೀವನವನ್ನು ಸುಂದರಗೊಳಿಸೋಣ

ನಾವೆಲ್ಲ ಸಮಾನರಾಗಿ ಬಾಳೋಣ


ಗಾಳಿ ,ನೀರು ,ತೋರಲ್ಲ ಬೇಧವನ್ನ

ಅವರಿಗಿಂತ ನಾವು ದೊಡ್ದವರಲ್ಲನ್ನ

ಬಿಟ್ಟು ಬಿಡೋಣ ದ್ವೇಷ -ಅಸೂಯೇಯನ್ನ

ಸಾರ್ಥಕಗೊಲಿಸೋನಾ ನಮ್ಮ ಜೀವನವನ್ನ
..................................ಜಪೂ

No comments: